ಪವಿತ್ರ ಹಾಗೂ ಶುಭದಾಯಕವಾದ ಯುಗಾದಿ ಹಬ್ಬದ ಈ ಸುಸಂದರ್ಭದಲ್ಲಿ, ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
ನಮ್ಮ ಸುತ್ತಲೂ ಸುಂದರ ವಸಂತವು ಹರ್ಷೋಲ್ಲಾಸವನ್ನು ಪಸರಿಸುವ ಕಾಲವಿದು. ಹೊಸದಾಗಿ ಅರಳುತ್ತಿರುವ ಸುಮಗಳ ಸೌರಭ ಮತ್ತು ಋತುಮಾನದ ಹಣ್ಣುಗಳ ಆಗಮನವು ನಮ್ಮಲ್ಲಿ ಹೊಸ ಚೈತನ್ಯ ಹಾಗೂ ವಿಪುಲ ಸಾಧ್ಯತೆಗಳ ಸ್ಫೂರ್ತಿಯನ್ನು ತುಂಬುತ್ತವೆ. ಅಂತೆಯೇ, ನಮ್ಮ ಶ್ರಮಜೀವಿ ರೈತಬಾಂಧವರು ಸಹ ಮಹತ್ತರವಾದ ಆಶಾವಾದದೊಂದಿಗೆ ಮುಂದಿನ ಕೃಷಿ ಋತುವಿಗೆ ಸಜ್ಜಾಗುವ ಸಂಭ್ರಮದ ಸಮಯವಿದು.
ಸಾಂಪ್ರದಾಯಿಕ ಸಡಗರದ ಯುಗಾದಿಯು ಜೀವನದ ಎಲ್ಲಾ ರಸಭಾವಗಳನ್ನು ಸಮಾನವಾಗಿ ಸ್ವೀಕರಿಸುವುದನ್ನು ನಮಗೆ ನೆನಪಿಸುತ್ತದೆ. ನಮ್ಮ ಸಂಸ್ಕೃತಿಯಲ್ಲಿ ವಿವಿಧ ಹಬ್ಬದ ಅಡುಗೆಗಳ ಜೊತೆಗೆ, ಈ ದಿನದಂದು 'ಸಿಹಿ-ಕಹಿ' ಸಮ್ಮಿಶ್ರಿತ ತಿನಿಸನ್ನು (ಬೇವು-ಬೆಲ್ಲ) ಸವಿಯುವ ವಿಶಿಷ್ಟ ಸಂಪ್ರದಾಯವಿದೆ. ಇದು ಬದುಕಿನ ಆಳವಾದ ಅರ್ಥವನ್ನು ನಮಗೆ ತಿಳಿಸಿಕೊಡುತ್ತದೆ; ಅಡೆತಡೆಗಳನ್ನು ಧೈರ್ಯದಿಂದ ಎದುರಿಸಲು ಮತ್ತು ಯಶಸ್ಸನ್ನು ವಿನಯಪೂರ್ವಕ ಕೃತಜ್ಞತೆಯಿಂದ ಸ್ವಾಗತಿಸಲು ಇದು ನಮಗೆ ಪ್ರೇರಣೆ ನೀಡುತ್ತದೆ.
ಈ ಹೊಸ ವರ್ಷವು ನಿಮ್ಮ ಬದುಕಿನಲ್ಲಿ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ತಂದುಕೊಡಲಿ. ನಿಮ್ಮ ಎಲ್ಲಾ ಸತ್ಕಾರ್ಯಗಳಲ್ಲಿ ಯಶಸ್ಸು ಲಭಿಸಲಿ ಹಾಗೂ ಶಾಂತಿ ಮತ್ತು ಸಕಾರಾತ್ಮಕತೆ ಸದಾ ನೆಲೆಸಲಿ.
ನಿಮ್ಮ,
ನರೇಂದ್ರ ಮೋದಿ
