ತೀರ್ಥಹಳ್ಳಿ- ಶಿವಮೊಗ್ಗ ಅರಣ್ಯ ಸಂಚಾರಿ ದಳದ DFO ನಾಗರಾಜ ಮತ್ತು ACFO ಬಾಲಚಂದ್ರರವರು ಇಂದು ದಾಳಿ ನಡೆಸಿ ಒಂದು ಆನೆ ದಂತ ಮತ್ತು ಆರೋಪಿ ನಾಲೂರು ವಾಸಿ ರಾಜಗೋಪಾಲ ಮತ್ತು ನೆರಟೂರು ವಾಸಿ ಕೃಷ್ಣಮೂರ್ತಿ ಎಂಬುವವರನ್ನು ಬಂಧಿಸಿದ್ದಾರೆ. ಹಾಗೂ ಸಾಗರ ತಾಲೂಕಿನ ತುಮುರಿ ಗ್ರಾಮದಲ್ಲಿ ಹದಿಮೂರು ಚಿರತೆ ಉಗುರುಗಳನ್ನು ವಶ ಪಡಿಸಿಕೊಂಡಿದ್ದು ಆರೋಪಿ ಗಳಾದ ದೇವರಾಜ,ಉದಯಕುಮಾರ್, ಸುಧಾಕರ ಮತ್ತು ನವೀನ ಎಂಬ ನಾಲ್ಕು ಆರೋಪಿ ಗಳನ್ನು ಬಂಧಿಸಿದ್ದಾರೆ. ಅರಣ್ಯ ಅಧಿಕಾರಿಗಳಾದ ಸಂಜಯ ,ರೇವಣ್ಣ ಸಿದ್ದಯ್ಯ, ಹಿರೇಮಠ, ಹನುಮಂತರಾಯ,ಮಹದೇವ,ಎಲ್ಲಪ್ಪ ರವರುಗಳು ಭಾಗವಹಿಸಿದ್ದರು. ಆರೋಪಿ ಗಳನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.