ಪ್ರಸಕ್ತ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ,
ನೀಟ್‍ನಲ್ಲಿ ಆಯ್ಕೆಯಾದ ವೈದ್ಯಕೀಯ (ಎಂ.ಬಿ.ಬಿ.ಎಸ್), ಬಿ.ಡಿ.ಎಸ್, ನೀಟ್,
ಬಿ.ಟೆಕ್, ಬ್ಯಾಚುಲರ್ ಅಫ್ ಆರ್ಕಿಟೆಕ್ಚರ್ ಮತ್ತು ಆಯುಷ್ ಪದವಿ
ಕೋರ್ಸ್‍ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು
ರಿನ್ಯೂವಲ್ ಸಾಲ ಯೋಜನೆಯಡಿ ಸಾಲ ಪಡೆಯಲು ಅಪೇಕ್ಷಿಸುವ
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
       ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಹಿಂದಿನ ವರ್ಷದಲ್ಲಿ ನಿಗಮದಿಂದ
ಪಡೆದಿರುವ ಒಟ್ಟು ಸಾಲದ ಬಾಕಿಯ ಮೊತ್ತದ ಶೇ.12% ರಷ್ಟನ್ನು
ಆಯಾ ಜಿಲ್ಲಾ ಕಚೇರಿಗಳಲ್ಲಿ ಪಾವತಿಸಿರಬೇಕು. ಅರ್ಜಿ ಸಲ್ಲಿಸಲು
ಆಸಕ್ತಿಯುಳ್ಳವರು ಡಿ.20 ರೊಳಗಾಗಿ ನಿಗಮದ
ವೆಬ್‍ಸೈಟ್ ಞmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ
ಸಲ್ಲಿಸಿದ ನಂತರ ಮೂಲ ಇಂಡೆಮ್ನಿಟಿ ಬಾಂಡ್  ಹಾಗೂ ಇತರೆ
ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಕರ್ನಾಟಕ
ಅಲ್ಪಸಂಖ್ಯಾತ ಅಭಿವೃಧ್ಧಿ ನಿಗಮ(ನಿ), ಕುರುಬರ ಹಾಸ್ಟೆಲ್ ಕಟ್ಟಡ,
ಹದಡಿ ರಸ್ತೆ, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ – 577002 ಇವರಿಗೆ
ಸಲ್ಲಿಸಬೇಕು.
       ಹೆಚ್ಚಿನ ಮಾಹಿತಿಗಾಗಿ ಫೋ.ನಂ: 08192-232349 ಸಂಪರ್ಕಿಸಬಹುದು
ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *