2022-23 ನೇ ಸಾಲಿನಲ್ಲಿ ಕರ್ನಾಟಕ ಮರಾಠ ಸಮುದಾಯಗಳ
ಅಭಿವೃದ್ಧಿ ನಿಗಮ (ನಿ) ದ ವತಿಯಿಂದÀ ಜನರ ಆರ್ಥಿಕ
ಅಭಿವೃದ್ಧಿಗಾಗಿ ಅನುಷ್ಟಾನಗೊಳಿಸುತ್ತಿರುವ ವಿವಿಧ
ಯೋಜನೆಗಳ ಸೌಲಭ್ಯಗಳನ್ನು ಮರಾತ, ಮರಾಠ, ಅರೆ
ಕ್ಷತ್ರಿ, ಅರೆ ಮರಾಠ, ಆರ್ಯ ಮರಾಠ, ಆರ್ಯ, ಆರ್ಯರು,
ಕೊಂಕಣ ಮರಾಠ, ಕ್ಷತ್ರಿಯ ಮರಾತ/ಕ್ಷತ್ರಿಯ ಮರಾಠ,
ಕುಳವಾಡಿ ಸಮುದಾಯದವರಿಂದ ಅರ್ಜಿಗಳನ್ನು
ಅಹ್ವಾನಿಸಲಾಗಿದೆ. ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ
ಫಲಾಪೇಕ್ಷಿಗಳು  ಅರ್ಜಿಸಲ್ಲಿಸಲು ಆಗಸ್ಟ್.19 ಕಡೇ ದಿನಾಂಕ
ವಾಗಿರುತ್ತದೆ.
ಯೋಜನೆಗಳು ಮತ್ತು ಸೌಲಭ್ಯಗಳು:
ಆರ್ಥಿಕ ಚಟುವಟಿಕೆಯಲ್ಲಿ ಸ್ವಯಂ ಉದ್ಯೋಗ
ಕೈಗೊಳ್ಳಲು ಶ್ರೀ ಶಹಜೀರಾಜೇ ಸಮೃದ್ಧಿ ಯೋಜನೆ
(ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ
ಯೋಜನೆ)  ಹಾಗೂ ಮರಾಠ ಸಮುದಾಯದ
ಯುವಜನತೆಯನ್ನು ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗ
ಮುಖಿಯನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ IಖಿIs, ಉಖಿಖಿಅ,
ಏಉಖಿಖಿI ಇತ್ಯಾದಿಗಳಲ್ಲಿ ಅಲ್ಪಾವಧಿ ಕೋರ್ಸುಗಳ ಮೂಲಕ
ಕೌಶಲ್ಯ ತರಬೇತಿ ನೀಡಲು ಸ್ವಾತಂತ್ರ್ಯ ಅಮೃತ
ಮಹೋತ್ಸವ ಮುನ್ನಡೆ ಯೋಜನೆಯನ್ನು ರೂಪಿಸಿದೆ.
ಯೋಜನೆಗೆ ಆನ್‍ಲೈನ್
ಮೂಲಕ “ಸುವಿಧಾ” ಪೋರ್ಟಲ್ hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ ವ
ುತ್ತು ಕೌಶಲ್ಯ ಕರ್ನಾಟಕ
ಪೋರ್ಟಲ್ hಣಣಠಿs://ತಿತಿತಿ.ಞಚಿushಚಿಟಞಚಿಡಿ.ಛಿom ತಂತ್ರಾಂಶದ ಮೂಲಕ
ಅರ್ಜಿಗಳನ್ನು ಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಮರಾಠ
ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ/ಡಿ.ದೇವರಾಜ
ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ,
ಕುರುಬರ ಹಾಸ್ಟೇಲ್ ಕಟ್ಟಡ, ಜಯದೇವ ಸರ್ಕಲ್ ಹತ್ತಿರ,
ದಾವಣಗೆರೆ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ: 08192
230934 ನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ಮರಾಠ
ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *