ಜಿಲ್ಲೆ ಯಲ್ಲಿ ಆಗಸ್ಟ್ 21 ರಂದು ಬಿದ್ದ ಮಳೆಯ
ವಿವರದನ್ವಯ 5.8ಮಿ.ಮೀ. ಸರಾಸರಿ ಮಳೆಯಾಗಿದ್ದು, ರೂ.
114.5 0 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು
ಮಳೆ ಹಾಗೂ ಹಾನಿ ವಿವರ ಈ ಕೆಳಕಂಡಂತಿದೆ.
ಚನ್ನಗಿರಿಯಲ್ಲಿ ವಾಡಿಕೆ ಮಳೆ 2.4 ಮಿ.ಮೀ ಹಾಗೂ ವಾಸ್ತವ
ಮಳೆ 4.6ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ ವಾಡಿಕೆ ಮಳೆ 4.7ಮಿ.ಮೀ
ಹಾಗೂ ವಾಸ್ತವ ಮಳೆ 10.3ಮಿ.ಮೀ, ಹರಿಹರದಲ್ಲಿ ವಾಡಿಕೆ ಮಳೆ
3.7ಮಿ.ಮೀ ಹಾಗೂ ವಾಸ್ತವ ಮಳೆ 8.0ಮಿ.ಮೀ, ಹೊನ್ನಾಳಿ ವಾಡಿಕೆ
ಮಳೆ 2.0ಮಿ.ಮೀ ಹಾಗೂ ವಾಸ್ತವ ಮಳೆ 3.1ಮಿ.ಮೀ, ಜಗಳೂರು
ವಾಡಿಕೆ ಮಳೆ 3.2 ಮಿ.ಮೀ ಹಾಗೂ ವಾಸ್ತವ ಮಳೆ 2.8ಮಿ.ಮೀ,
ನ್ಯಾಮತಿಯಲ್ಲಿ ವಾಡಿಕೆ ಮಳೆ 3.7ಮಿ.ಮೀ ಹಾಗೂ ವಾಸ್ತವ ಮಳೆ
6.3ಮಿ.ಮೀ ಮಳೆÉಯಾಗಿದೆ.
ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 10 ಪಕ್ಕಾ ಮನೆ ತೀವ್ರ
ಹಾನಿಯಾಗಿದ್ದು, ರೂ. 50.00 ಲಕ್ಷ, 19 ಪಕ್ಕಾಮನೆ ಭಾಗಶ:
ಹಾನಿಯಾಗಿದ್ದು, ರೂ. 57.00 ಲಕ್ಷ, ಒಟ್ಟು ರೂ.107.00 ಲಕ್ಷ ಅಂದಾಜು
ನಷ್ಟ ಸಂಭವಿಸಿರುತ್ತದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 2 ಪಕ್ಕಾ ಮನೆ ತೀವ್ರ
ಹಾನಿಯಾಗಿದ್ದು, ರೂ.3.00 ಲಕ್ಷ, 3 ಪಕ್ಕಾ ಮನೆ ಭಾಗಶ: ಹಾನಿ
ಯಾಗಿದ್ದು, ರೂ. 1.00 ಲಕ್ಷ, 2 ಕಚ್ಚಾ ಮನೆ ತೀವ್ರ
ಹಾನಿಯಾಗಿದ್ದು, ರೂ.2.50 ಲಕ್ಷ, 1 ಕಚ್ಚಾ ಮನೆ ಭಾಗಶ:
ಹಾನಿಯಾಗಿದ್ದು, ರೂ. 1.00 ಲಕ್ಷ ಒಟ್ಟು ರೂ.7.50 ಲಕ್ಷ ಅಂದಾಜು
ನಷ್ಟ ಸಂಭವಿಸಿರುತ್ತದೆ.

ಜಿಲ್ಲೆಯಲ್ಲಿ ಒಟ್ಟಾರೆ ರೂ. 114.5 0 ಲಕ್ಷ ಅಂದಾಜು ನಷ್ಟ
ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿ ಅನ್ವಯ
ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದೆಂದು
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *