ದಾವಣಗೆರೆ ಜೂ.11 :ದಾವಣಗೆರೆ ನಗರದಲ್ಲಿನ ವಿಕಲಾಂಗ ವ್ಯಕ್ತಿಗಳ ಸಂಯೋಜಿತ ಪ್ರಾದೇಶಿಕ ಕೇಂದ್ರ 2024-25 ಶೈಕ್ಷಣಿಕ ವರ್ಷದÀ ಡಿ.ಇಡಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಶ್ರವಣ ದೋಷ ಮತ್ತು ಬೌದ್ದಿಕ ಬೆಳವಣಿಗೆಯ ಅಸಾಮಥ್ರ್ಯ ಕೋರ್ಸ್, ಪ್ರತಿ ಕೋರ್ಸ್‍ನಲ್ಲಿ 35 ಸೀಟುಗಳನ್ನು ಹೊಂದಿರುವ ಸಿಆರ್‍ಸಿ ಶೇ.50ರಷ್ಟು ಅಂಕಗಳೊಂದಿಗೆ 10+2 ಅರ್ಹತಾ ಮಾನದಂಡಗಳು (ಎಸ್‍ಸಿ,ಎಸ್.ಟಿ, ದಿವ್ಯಾಂಗ ವ್ಯಾಕ್ತಿಗಳು, ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು) 2 ವರ್ಷದ ಕೋರ್ಸ್, ಶುಲ್ಕ ರೂ.24000/-, ಅಂಗವಿಕಲರು ಮತ್ತು ಅವರ ಒಡಹುಟ್ಟಿದವರು, ಕುಟುಂಬದ ಸದಸ್ಯರಿಗೆ ಯಾವುದೇ ಶುಲ್ಕವಿಲ್ಲ. ಅರ್ಜಿ ಸಲ್ಲಿಸಲು ಜೂನ್ 14 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:8746043062, 8125359257 ನ್ನು ಸಂಪರ್ಕಿಸಬೇಕೆಂದು ಸಿಆರ್‍ಸಿ ನಿರ್ದೇಶಕಿ ಮೀನಾಕ್ಷಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *