ಕೃಷಿ ಬಗ್ಗೆ ರೈತರ ಆಸಕ್ತಿ ಕಡಿಮೆ ಆಗಿರುವುದರಿಂದ ಕೃಷಿ ಹಿಂದೆ ಬಿದ್ದಿದೆ, ಯುವ ರೈತರು ನಗರ ಪ್ರದೇಶದ ಆಕರ್ಷಣೆ ಹಾಗೂ ನೌಕರಿಗೆ ವ್ಯಾಪರಕ್ಕೆ ಒತ್ತು ಕೊಡುವಷ್ಟು ಕೃಷಿಗೆ ಕೊಡದ ಕಾರಣ ಕೃಷಿ ಹಿನ್ನಲೆಗೆ ಬಿದ್ದಿದೆ ಎಂದು ಕಾಶಿ ಪೀಠದ ಜಗದ್ಗುರು 1008 ಡಾ.ಮಲ್ಲಿಕಾಜರ್ನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರು ಬೇಸರ ವ್ಯಕ್ತಪಡಿಸಿದರು.
ಲಿಂ.ಶ್ರೀ ಮೃತ್ಯುಂಜಯ ಶಿವಾಚಾರ್ಯ ಶ್ರೀಗಳ ಪುಣ್ಯಾರಾಧನೆ ಹಾಗೂ ಲಿಂ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕೃಷಿಮೇಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ನಮ್ಮ ಪೂರ್ವಜರ ಕಾಲದಲ್ಲಿ ಕೃಷಿ ಉನ್ನತ ಸ್ಥಾನ ಪಡೆದಿತ್ತು, ವ್ಯಾಪಾರ ಮಧ್ಯಮ, ನೌಕರಿ ಕೊನೆಯ ಸ್ಥಾನ ಪಡೆದಿತ್ತು, ಆದರೀಗ ವ್ಯಾಪಾರ, ಉದ್ಯೋಗ ಮೊದಲೆರಡು ಸ್ಥಾನ ಪಡೆದು ಕೃಷಿಯನ್ನು ಕೊನೆಯ ಸ್ಥಾನಕ್ಕೆ ತಳ್ಳಿದೆ ಎಂದು ಹೇಳಿದರು. ಒಂದು ಮನೆಯಲ್ಲಿ ಇಬ್ಬರು ಮಕ್ಕಳಿದ್ದು ಒಬ್ಬರು ಕೃಷಿಯನ್ನು, ಮತ್ತೊಬ್ಬರು ನೌಕರಿಯನ್ನು ಅವಲಂಬಿಸಿದ್ದರೆ, ನಾವು ನೌಕರಿ ಇರುವ ಮಗನನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ. ಇದನ್ನು ಬಿಡಬೇಕು ಎಂದ ಅವರು, ಭೂಮಿ ರಾಸಾಯನಿಕ ಗೊಬ್ಬರಗಳಿಂದ ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದ್ದು, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವತ್ತ ರೈತರು ಗಮನಕೊಡಬೇಕು ಎಂದರು.
ಇದು ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಆಹಾರದ ಕೊರತೆ ಉಂಟಾಗಬಹುದು, ನಮ್ಮ ಯುವಕರು ಎಚ್ಚೆತ್ತುಕೊಳ್ಳದಿದ್ದರೆ ದೇಶದಲ್ಲಿ ಆಹಾರ ಭದ್ರತೆ ಕಾಡುವುದರಲ್ಲಿ ಅನುಮಾನವೇ ಇಲ್ಲ ಎಂದರು.
ಭೂಮಿತಾಯಿಯನ್ನು ನಂಬಿದರೆ ನಮಗೆ ಕೊನೆಯವರೆವಿಗೂ ಅನ್ನ ನೀಡಿ ಸಾಕುತ್ತಾಳೆ, ಆದರೆ ನಾವು ಭೂಮಿತಾಯಿಯನ್ನು ಮರೆತರೆ ಆಕೆ ಕೂಡ ನಮ್ಮ ಅನ್ನಕ್ಕೂ ಕಮಟಕ ಆಗಬಹುದು,ಆದ್ದರಿಂದ ಮನೆಯಲ್ಲಿ ಕೃಷಿಗೆ ಮೊದಲ ಆಧ್ಯತೆ ನೀಡಿ ಎಂದು ರೈತರಿಗೆ ಕರೆ ನೀಡಿದರು.
ಪೆÇೀಷಕರು ತಮ್ಮ ಮಕ್ಕಳ ವಿಷಯದಲ್ಲಿ ನೌಕರಿ ಮಾಡುವ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಕ್ಕಳಲ್ಲಿ ತಾರತಮ್ಯ ಮಾಡುತ್ತಿರುವುದು ಕಂಡು ಬರುತ್ತಿದೆ ಇದು ಸಲ್ಲದು ಎಂದು ಹೇಳಿದರು.
ಶಿಕ್ಷಣದಲ್ಲಿ ಹಾಗೂ ಇತರ ಜ್ಞಾನ ಅಪಾರವಿರುವ ಯುವಕ ನೌಕರಿ ಹಿಡಿಯುತ್ತಾನೆ, ಶಿಕ್ಷಣದಲ್ಲಿ ಜ್ಞಾನದಲ್ಲಿ ಹಿಂದುಳಿದವ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯವಾಗಿದೆ ಅಪಾರ ಜ್ಞಾನವಂತ ಕೃಷಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಎಂದು ಹೇಳಿದರು
ಪ್ರಾಸ್ತಾವಿಕವಾಗಿ ಮಾತನಾಡಿದ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನಾ ಶಿವಾಚಾರ್ಯ ಸ್ವಾಮಿಜಿಗಳು, ಶ್ರೀಮಠದಿಂದ ಕೃಷಿಮೇಳ ಮಾಡುವ ಅವಶ್ಯಕತೆ ಇತ್ತೆ ಎಂದು ಕೆಲವ ಮನಸ್ಸಿನಲ್ಲಿದೆ ಆದರೆ ಇಂದು ರೈತನ ಬದುಕು ನಿಜಕ್ಕೂ ದುಸ್ತರವಾಗಿದೆ ಎಂಬುದನ್ನೆ ಎಲ್ಲರೂ ಅರಿಯಬೇಕು ಹಾಗಾಗಿ ಶ್ರೀಮಠ ರಾಜ್ಯಮಟ್ಟದ ಕೃಷಿಮೇಳ ನಡೆಸಿಅವರ ಬದುಕು ಹಸನಾಗಬೇಕು ಎಂದ ನಮ್ಮ ಆಶಯ ಎಂದರು.
ರೈತ ಎಂದೂ ತಮ್ಮ ನೆಮ್ಮದಿಯ ಜೀವನ ಸಾಗಿಸುತ್ತಾನೋ ಆಗ ಮಾತ್ರ ನಾವು ನೆಮ್ಮದಿಯಾಗಿರಲು ಸಾಧ್ಯ, ಹಾಗಾಗಿ ನಮ್ಮ ಶ್ರೀ ಮಠದಲ್ಲಿ ರಾಜ್ಯಮಟ್ಟದ ಕೃಷಿಮೇಳ ನಡೆಸಲು ಹಮ್ಮಿಕೊಂಡಿದ್ದೇವೆ ಎಂದ ಅವರು ಕೆಲವರು ಕೃಷಿಮೇಳ ನಡೆಸಲು ಸಮಯ ಅವಕಾಶ ಕಡಿಮೆ ಇದೆ ಎಂದು ಹೇಳಿದ್ದರೂ ಆದರೂ ನಾವು ಎಲ್ಲವನ್ನು ಅನುವು ಮಾಡಿಕೊಂಡು ಎಲ್ಲರ ಸಹಕಾರದಿಂದ ಕೃಷಿಮೇಳ ನಡೆಸುತ್ತಿದ್ದೇವೆ ಎಂದರು.ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್,ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಬಯಲುಸೀಮೆ ನಿಗಮ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಾಗೂ ಇತರರು ಕೃಷಿಮೇಳಕ್ಕೆ ಶಕ್ತಿಮೀರಿ ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
