ನ್ಯಾಮತಿ:ಪ್ರತಿಯೊಬ್ಬರು ಪ್ರಾಮಾಣಿಕವಾಗಿದುಡಿಮೆ ಮಾಡಬೇಕು, ಅನಾಯಾಸವಾಗಿ ಹಣ ಬರುವ ಮಾರ್ಗವನ್ನುತೊರೆಯಬೇಕು ಎಂದು ಚೀಲೂರು ಸಾಮಾಜಿಕ ಕಾರ್ಯಕರ್ತ ಪುರುವಂತರ ಪರಮೇಶ್ವರಪ್ಪ ಸಲಹೆ ನೀಡಿದರು.
ತಾಲ್ಲೂಕುಕನ್ನಡ ಸಾಹಿತ್ಯ ಪರಿµತ್ತುಕಚೇರಿಯಲ್ಲಿ ನಡೆದ ತಾಲ್ಲೂಕಿನ ಪ್ರತಿಭೆಗಳನ್ನು ಪರಿಚಯಿಸುವ4ನೇ ಸಾಹಿತ್ಯಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಗರಾಜಗೌಡ,ಸುಭಾಷ್‍ಚಂದ್ರರೆಡ್ಡಿ, ಎಂ.ಬಿ.ಶಿವಯೋಗಿ, ಸೈಯದ್‍ಅಪ್ಸರ್ ಪಾಶ, ಕೆ.ಟಿ. ಸತ್ಯನಾರಾಯಾಣ, ಸಿ.ಕೆ.ಬೋಜರಾಜ,ರೇವಣಸಿದ್ದಪ್ಪ, ಎಚ್.ಶಿವಾನಂದಪ್ಪ ಅವರುಕನ್ನಡ ಭಾಷೆ, ಸಾಹಿತಿಗಳ ಕುರಿತು ಮಾಹಿತಿ ನೀಡಿದರು.
ಈ ಸುಮಲತಾ, ಸೊಂಡೂರು ಮಹೇಶ್ವರಪ್ಪ, ಮಂಜಪ್ಪ,ಜಿ.ಆರ್ ಮಮತಾ,ಜಿ.ಆರ್.ಶ್ವೇತಾ, ರೇಖಾ, ಪುಷ್ಪಾ, ಕವಿತಾ ಬಳೆಗಾರ ಕವನ ವಾಚನ ಮಾಡಿದರು.
ಕುಂಕುವ ಗ್ರಾಮ ಪಂಚಾಯಿತಿಅಧ್ಯಕ್ಷಚಂದನಜಂಗ್ಲಿಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ.ಎಂ.ಹಾಲಾರಾಧ್ಯ, ನಿಕಟಪೂರ್ವಅಧ್ಯಕ್ಷ ಜಿ.ನಿಜಲಿಂಗಪ್ಪ, ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ ಉಪಸ್ಥಿತರಿದ್ದರು.
ನಟಿ ನಿರೂಪಕಿಅಪರ್ಣಾ ಮತ್ತು ಕಸಾಪ ಅಜೀವ ಸದಸ್ಯ ಬೆಳಗುತ್ತಿ ಸೋಮಸುಂದರರಾಜಅರಸ್‍ಅವರ ಅಕಾಲಿಕ ಮರಣಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *