ನ್ಯಾಮತಿ:ಪ್ರತಿಯೊಬ್ಬರು ಜೀವನದಲ್ಲಿಜೀವನೋತ್ಸಾಹವನ್ನು ರೂಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಬಿಜಿಎಸ್‍ಆಸ್ಪತ್ರೆ ಮನೋವೈದ್ಯರಘು ಹೇಳಿದರು.
ಪಟ್ಟಣದ ಮಹಾಂತೇಶ್ವರಕಲ್ಯಾಣ ಮಂದಿರದಲ್ಲಿ ಹಾರ್ಟ್‍ಪುಲ್‍ನೆಸ್ ಇನ್‍ಸ್ಟಿಟ್ಯೂಟ್ ಶ್ರೀರಾಮಚಂದ್ರ ಮಿಷನ್ ಅವರಿಂದ ಆಯೋಜಿಸಲಾಗಿದ್ದ ಉಚಿತ ಧ್ಯಾನೋತ್ಸವ ಕಾರ್ಯಕ್ರಮದಲ್ಲಿಅವರು ಉಪನ್ಯಾಸ ನೀಡಿದರು.
ಭೌತಿಕ ಜೀವನದಲಿ ್ಲಆಧ್ಯಾತ್ಮಿಕ ಮತ್ತು ಸಂಸಾರಿಕ ಜೀವನವನ್ನು ಹೇಗೆ ನಡೆಸಿಕೊಂಡು ಹೋಗುವುದು ಮತ್ತುಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಅಭ್ಯಾಸಿಗಳಿಗೆ ಉದಾಹರಣೆಗಳ ಸಹಿತ ವಿವರಿಸಿದರು.
ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಹಾರ್ಟ್‍ಫುಲ್ ಸಂಸ್ಥೆಯ ಅಭ್ಯಾಸಿಗಳು ಪಾಲ್ಗೊಂಡಿದ್ದರು.
ಶಿವಮೊಗ್ಗ ಮಾನಸ ನರ್ಸಿಂಗ್ ಹೋಂ ವೈದ್ಯೆ ವಿದ್ಯಾ, ವೆಟನರಿ ಡಾ.ವಿನಯ, ದಾವಣಗೆರೆ ಅಭ್ಯಾಸಿ ಸಿದ್ದೇಶ,ಸರಸ್ವತಿ, ನ್ಯಾಮತಿಯ ದೊಡ್ಡೆತ್ತಿನಹಳ್ಳಿ ದಿನೇಶ, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *