ನ್ಯಾಮತಿ ತಾಲೂಕು ಗೋವಿನ ಕೋವಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ಗೌರಿ ಅಮಾವಾಸ್ಯೆ ಪೂಜಾ ಕಾರ್ಯಕ್ರಮ ಶ್ರೀ ಮಠದಲ್ಲಿ ಪ್ರತಿವರ್ಷದಂತೆ ಲೋಕ ಕಲ್ಯಾಣ ಅರ್ಥವಾಗಿ ಶ್ರೀ ಮನ್ರುಪ ಶಾಲಿವಾಹನ ಶಕೆ ೧೯೪೭ನೇ ತ್ರಿ ಕ್ರೋಧಿ ನಾಮ ಸಂವತ್ಸರದ ಶ್ರಾವಣ ಮಾಸದ ಶುದ್ಧ ಪ್ರತಿಪದ ದಿನಾಂಕ 5.08.2024ನೇ ಸೋಮವಾರದಿಂದ ದಿ 2/9 /2024 ನೇ ಸೋಮವಾರ ಸಂಜೆ 6.30 ಗಂಟೆಗೆ ಸರಿಯಾಗಿ ಗೌರಿ ಅಮಾವಾಸ್ಯೆವರೆಗೆ ಶ್ರೀಗಳವರ ತ್ರಿಕಾಲ ಇಷ್ಟಲಿಂಗ ಪೂಜಾನುಷ್ಟಾನ, ಕರ್ತೃ ಗದ್ದಿಗೆ ಹಾಗೂ ಶಕ್ತಿಮಾತೆ ಶ್ರೀ ಗುಳ್ಳಮ್ಮ ದೇವಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಸುಮಂಗಲಿಯರಿಗೆ ಉಳಿತುಂಬುವುದು ಹಾಗೂ ದೇವಿಗೆ ಎಡೆ ಹಾಕುವುದು ಸೇರಿದಂತೆ ಪ್ರಸಾದ ಇತ್ಯಾದಿ ಕಾರ್ಯಕ್ರಮಗಳು ಜರುಗುತ್ತವೆ. ಎಂದು ಹಾಲುಸ್ವಾಮಿ ಸೇವಾ ಸಮಿತಿಯ ಕಾರ್ಯದರ್ಶಿ ವಿ ಎಸ್ ರುದ್ರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.