ಹೊನ್ನಾಳಿ; ಸೆ, 20 ಪಟ್ಟಣದಲ್ಲಿರುವ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೊನ್ನಾಳಿ ಇದರ 2023 -24ನೇ ಸಾಲಿನ ಸರ್ವ ಸದಸ್ಯರ 24ನೇ ವಾರ್ಷಿಕ ಮಹಾಸಭೆಯ ಪೂರ್ವಭಾವಿ ಸಭೆ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ನಡೆಯಿತು. ಅಧ್ಯಕ್ಷರಾದ ಕೆ ಎಸ್ ಶಿವಕುಮಾರ್ ವಾರ್ಷಿಕ ಮಹಾಸಭೆಯ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದರಲ್ಲಿ ವಿಶೇಷವಾಗಿ ನಮ್ಮ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಹೊನ್ನಾಳಿ ಇದರ 24ನೇ ವಾರ್ಷಿಕ ಮಹಾ ಸಭೆಗೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಬ್ಯಾಂಕಿನ ಶೇರುದಾರರಿಗೆ ನಿರ್ದೇಶಕರುಗಳಿಗೆ ಸಾರ್ವಜನಿಕರಲ್ಲಿ ಮನವಿ ಮಾಡುವುದು ಇಷ್ಟೇ 23- 9 -2024 ಸೋಮವಾರದಂದು ಬೆಳಗ್ಗೆ 11:00 ಗಂಟೆಗೆ ನಡೆಯುವ ಮಹಾ ಸಭೆಗೆ ಹಾಜರಾಗಿ, ಸಂಘದ ಪ್ರಗತಿಯ ವಿಚಾರವಾಗಿ ಅಂದಿನ ದಿವಸ ವಾರ್ಷಿಕ ಮಹಾಸಭೆ ಅಂತ ವ್ಯಯ ಮಂಡಿಸಲಾಗುವುದು. ಇದರ ಜೊತೆಗೆ 25ನೇ ವರ್ಷದ ಸಂಭ್ರಮ ಆಚರಣೆಯನ್ನು ಶ್ರೀ ತರಳಬಾಳು ಸಮುದಾಯ ಭವನ ಗೊಲ್ಲರಹಳ್ಳಿಯಲ್ಲಿ ವಾರ್ಷಿಕ ಮಹಾಸಭೆಯನ್ನ ಅದ್ದೂರಿಯಾಗಿ ನಡೆಸಲಾಗುವುದು ಅದರ ಹಿನ್ನೆಲೆಯಲ್ಲಿ ಬ್ಯಾಂಕಿನ ಸರ್ವ ನಿರ್ದೇಶಕರು ಹಾಗೂ ಷೇರುದಾರರು ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಲು ಕೋರಲಾಗಿದೆ ಎಂದರು.


ಆಡಳಿತ ಮಂಡಳಿಯ ಉಪಾಧ್ಯಕ್ಷರು ಜೆ ಎನ್ ಬಸವರಾಜ್, ನಿರ್ದೇಶಕರು ಪಿಜಿ ಶೈಲೇಶ್, ಪಿ ಚಂದ್ರಪ್ಪ ಎಮ ಸತೀಶ್, ಜಿ ಕೆಂಚಪ್ಪ, ಆರ್ ಸಿ ಶಂಕರ್ ಗೌಡ, ಚನ್ನವೀರಪ್ಪ ಡಿ,ಜಿ ಎನ್, ಕೆಜಿ ಕರಿಬಸಪ್ಪ, ಜಿಎಸ್ ಬಸವನಗೌಡ, ಎನ್ ಕೃಷ್ಣ ನಾಯ್ಕ್ ,ಜಿ ಯಶೋದಮ್ಮ, ಕೆಜಿ ಮಂಜುಳಾ, ಕಾರ್ಯದರ್ಶಿ ಹೆಚ್ ಎನ್ ರುದ್ರೇಶ್ ಸಹ ಇದ್ದರು.

Leave a Reply

Your email address will not be published. Required fields are marked *