ನ್ಯಾಮತಿ ತಾಲೂಕು ಗೋವಿಕೋವಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು. ಈ ಹಿಂದೆ ಪರಮೇಶ್ವರಪ್ಪನವರು ಅಧ್ಯಕ್ಷರಾಗಿದ್ದರು ಅವರ ಅಧಿಕಾರದ ಅವಧಿ ತೆರುವಾದ ಸ್ಥಾನಕ್ಕೆ ಇಂದು ಅಧ್ಯಕ್ಷರ ಗಾದೆಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಅರ್ಜಿ ಸಲ್ಲಿಸಿದ್ದರು. ಬೇರೆ ಯಾವ ನಿರ್ದೇಶಕರುಗಳು ನಾಮಪತ್ರ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಯುಎಸ್ ನಾಗರಾಜಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಗಳು ಹಾಗೂ ಪಿಡಿಒ ಸತೀಶ್ ಕುಮಾರ್ ಹೆಚ್ ಘೋಷಣೆ ಮಾಡಿದರು. ನೂತನ ಅಧ್ಯಕ್ಷ ಯು ಎಸ್ ನಾಗರಾಜಪ್ಪ ಪದಗ್ರಹಣ ಸ್ವೀಕರಿಸಿ ನಂತರ ಮಾತನಾಡಿದ ಅವರು ಹಾಲು ಉತ್ಪಾದಕರಿಗೆ ಸರ್ಕಾರದಿಂದ ಸಿಗುವ 5ರೂ ಸಹಾಯಧನ ಕೊಡಿಸುವುದು, ಹಾಗೂ ಚಾಪ್ ಕಟ್ಟರ್, ಜಾನುವಾರುಗಳ ಕಾಲುಗಳಿಗೆ ಹಾಕಲಿಕ್ಕೆ ರಬ್ಬರ್ ಮ್ಯಾಟ್, ವಿಮೆ ಇನ್ನೂ ಮುಂತಾದ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ಹಾಲು ಉತ್ಪಾದಕರಿಗೆ ಕೊಡಿಸಲಾಗುವುದು ಎಂದರು.
ಉಪಾಧ್ಯಕ್ಷರಾದ ಲಕ್ಷ್ಮಿ ಬಿ. ನಿರ್ದೇಶಕರುಗಳಾದ ಸುಜಾತಾ ರವಿಕುಮಾರ್, ವಿ ಎಚ್ ರುದ್ರೇಶ್, ಸಿದ್ದೇಶ್ ಜಿ ಎಸ್, ಬಾನಪ್ಪ ಎಸ್, ನಾಗರಾಜ್ ಹೆಚ್, ಸಿ. ಶಾರದಾ, ಜಿ ಪರಮೇಶ್ವರಪ್ಪ, ಕಾರ್ಯದರ್ಶಿ ರಾಹುಲ್, ಮಾಜಿ ಕಾರ್ಯದರ್ಶಿ ವಿ ಆರ್ ವೀರೇಶ್, ಮಧು, ರಮೇಶ್ ಎಂ ಹೆಚ್, ಹನುಮಂತಪ್ಪ ಹಾಗೂ ಹಾಲು ಉತ್ಪಾದಕರು ಸಹ ಭಾಗಿಯಾಗಿದ್ದರು.