ನ್ಯಾಮತಿ; ಯಾವುದೇ ರಂಗದ ಕಲಾವಿದರ ಜೀವನ ಅವರ ವಯಸ್ಸಾದಂತೆ ಜೀವನ ನಿರ್ವಹಣೆ ಕಷ್ಟಕರವಾಗಿರುತ್ತದೆ ಎಂದು ಗೋಣಿಬಿಡು ಜೂನಿಯರ್ ಅಂಬರೀಶ್(ಲಿಂಗಾರಾಧ್ಯ) ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಶನಿವಾರ 22ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅಂಬರೀಶ್ ಅವರ ತದ್ರೂಪಿ ಅಭಿನಯವನ್ನು ಪ್ರದರ್ಶಿಸಿ ಮಾತನಾಡಿದರು.
ಶ್ರೀಮಂತ ನಟರನ್ನು ಹೊರತುಪಡಿಸಿ ಸಾಮಾನ್ಯ ಕಲಾವಿದರು ತಮ್ಮ ಜೀವನವನು ನಟನೆಗೆ ಮೀಸಲಿಟ್ಟು ಬರುವ ಆದಾಯದಲ್ಲಿ ಜೀವನ ನಡೆಸುತ್ತಾರೆ. ಆದರೆ ಅವರ ಕೊನೆಯ ದಿನದಲ್ಲಿ ನಟನೆಗೆ ಅವಕಾಶ ಸಿಗದೆ ಬಹಳ ಸಂಕಷ್ಟ ಎದುರಿಸುತ್ತಾರೆ ಎಂದು ನೊಂದು ನುಡಿದರು.
ಈ ಸಲುವಾಗಿ ತಮ್ಮ ಗ್ರಾಮದಲ್ಲಿ ಸಾರ್ವಜನಿಕರ ನೆರವಿನಿಂದ ಕಲಾವಿದರ ನೆರವಿಗಾಗಿ ಕಲಾ ಭವನ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಕಲಾಭಿಮಾನಿಗಳ ಸಹಕಾರ ಅಗತ್ಯ ಎಂದರು.
ಅಂಬರೀಶ್ ಅವರ ಚಲನಚಿತ್ರದ ಹಾಡುಗಳಿಗೆ ನೃತ್ಯ, ದಿವಂಗತ ನಟರಾದ ರಾಜಕುಮಾರ, ವಿಷ್ಣವರ್ಧನ, ಪುನೀತ್ ರಾಜಕುಮಾರ, ಟೈಗರ್ ಪ್ರಭಾಕರ, ಶಂಕರನಾಗ್, ವಜ್ರಮುನಿ, ದಿನೇಶ, ಬಾಲಕೃಷ್ಣ, ಎನ್.ಎಸ್.ರಾವ್ ಅªರ ಧ್ವನಿಗಳನ್ನು ಅನುಕರಣೆ ಮಾಡಿ ರಂಜಿಸಿದರು.
ಸೌರಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಘಟಕದ ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ ಕಸಾಪ ವತಿಯಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಿರರ್ಗಳವಾಗಿ ಕನ್ನಡ ಕವನ, ಹಾಡು, ವಚನಗಳನ್ನು ಹಾಡಿ, ನೃತ್ಯ ಪ್ರದರ್ಶನದ ನೀಡುವ ಮೂಲಕ ಕನ್ನಡಾಭಿಮಾನಿಗಳ ಮೆಚ್ಚುಗೆ ಪಡೆದರು.
ಆರುಂಡಿ ಮಂಜಪ್ಪ, ಶಿಕ್ಷಕಿ ನಾಗರತ್ನ, ಕೆ.ಮಲ್ಲಪ್ಪ, ಶಿವಮೊಗ್ಗದ ವಿಶ್ವಾಸ, ಮಾದನಬಾವಿ ಲಲಿತಾ, ರೇಖಾ, ಈ ಸುಮಲತಾ, ಪುಷ್ಪಾ ಹಾಡಿದರು.
ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಬೆಳಗುತ್ತಿಯ ವಿದ್ಯಾರ್ಥಿನಿ ಮೈತ್ರಿ ಅವರನ್ನು ಸನ್ಮಾನಿಸಲಾಯಿತು. ಉರ್ದುಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತಿಗಳ ಪುಸ್ತಕವನ್ನು ನೀಡಿ ಗೌರವಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಜಿ.ನಿಜಲಿಂಗಪ್ಪ ಕೋಶಾಧ್ಯಕ್ಷ ಎಂ.ಎಸ್.ಜಗದೀಶ, ಜಿ.ಷಡಾಕ್ಷರಿ, ಶ್ವೇತಾ ಸಿ.ಆರ್. ಎಂ.ಜಿ.ಕವಿರಾಜ, ಆಚೆಮನೆ ತಿಪ್ಪೇಸ್ವಾಮಿ, ಎನ್.ಆರ್.ಸುಂದರೇಶ, ಸಿ.ಕೆ.ಬೋಜರಾಜ, ಸೊಂಡೂರು ಮಹೇಶ್ವರಪ್ಪ, ಗಜಾನನ, ಬಿ.ಜಿ.ಚೈತ್ರಾ, ಅಂಬಿಕಾ ಬಿದರಕಟ್ಟೆ ಮಾತನಾಡಿದರು.

Leave a Reply

Your email address will not be published. Required fields are marked *