ಜಿಲ್ಲೆಯಲ್ಲಿರುವ ಖಾಸಗಿ ರಕ್ತ ಕೇಂದ್ರಗಳು ಕಾನೂನು ರೀತ್ಯ ನೋಂದಣಿ ಮಾಡಿಸಿಕೊಂಡು ಕಾರ್ಯ ನಿರ್ವಹಿಸಬೇಕು, ಎಲ್ಲಾ ರಕ್ತ ಕೇಂದ್ರಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ತಿಳಿಸಿದರು.
ಅವರು ಫೆಬ್ರವರಿ 5 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಕ್ತ ಕೇಂದ್ರಗಳ ಸಮನ್ವಯ ಸಭೆ, ಹೆಚ್.ಐ.ವಿ, ಏಡ್ಸ್ ಹರಡುವಿಕೆ ಮತ್ತು ನಿಯಂತ್ರಣ ಕುರಿತ ಸಮನ್ವಯ ಸಭೆ ಮತ್ತು ರಾಷ್ಟಿçÃಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಏರ್ಪಡಿಸಿದ್ದ ಸಭೆಯÀ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಜಿಲ್ಲೆಯಲ್ಲಿರುವ ಅನೇಕ ಖಾಸಗಿ ರಕ್ತ ಕೇಂದ್ರಗಳು ಸಾಮಾನ್ಯ ಜನರಿಂದ ಮತ್ತು ಹೆಚ್.ಐ.ವಿ ಭಾದಿತರಿಂದ ರಕ್ತವನ್ನು ಪಡೆದು ನಂತರ ಪರೀಕ್ಷಿಸದೆ ನೇರವಾಗಿ ಮಾರಾಟ ಮಾಡುತ್ತಿರುವುದು ಮತ್ತು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಆದುದರಿಂದ ರಕ್ತ ಕೇಂದ್ರಗಳಲ್ಲಿ ಪಡೆಯುವ ರಕ್ತವನ್ನು ಕಡ್ಡಾಯವಾಗಿ ಪರೀಕ್ಷಿಸಿ ಮಾರಾಟ ಮಾಡಬೇಕು, ರಕ್ತ ಕೇಂದ್ರಗಳ ಮುಂದೆ ರಕ್ತದ ದರವನ್ನು ಕಡ್ಡಾಯವಾಗಿ ಅಳವಡಿಸಬೇಕು ಮತ್ತು ಕ್ಯಾಂಪ್‌ಗಳನ್ನು ಆಯೋಜಿಸಿದ ಸಂದರ್ಭದಲ್ಲಿ ಶೇಖರಣೆಗೊಂಡ ಶೇ. 25 ರಷ್ಟು ರಕ್ತವನ್ನು ಜಿಲ್ಲಾಸ್ಪತ್ರೆಗೆ ಕಡ್ಡಾಯವಾಗಿ ನೀಡಬೇಕು. ಬಿಪಿಎಲ್ ಕಾರ್ಡ್ ಹೊಂದಿದರವರಿಗೆ ಉಚಿತವಾಗ ರಕ್ತವನ್ನು ನೀಡಬೇಕು, ಯಾವುದೇ ದೂರುಗಳು ಮರುಕಳಿಸದಂತೆ ಖಾಸಗಿ ರಕ್ತ ಕೇಂದ್ರಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ:- ಕ್ಷಯರೋಗವು ವಾಸಿಯಾಗುವಂತಹ ಖಾಯಿಲೆ, 2 ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ರಕ್ತ ಮಿಶ್ರಿತ ಕಫ ಬರುವುದು, ಉಸಿರಾಡುವಾಗ ಎದೆ ನೋವು ಕಾಣಿಸಿಕೊಳ್ಳುವುದು ಸಂಜೆ ಅಥವಾ ರಾತ್ರಿ ಜ್ವರ ಬರುವುದು, ರಾತ್ರಿ ಅತಿಯಾಗಿ ಬೆವರುವುದು. ತೂಕ ನಷ್ಟ ಮತ್ತು ಆಯಾಸವಾಗುವುದು, ಹಸಿವಾಗದಿರುವುದು ಮತ್ತು ತೂಕ ಕಡಿಮೆಯಾಗುವುದು ಕ್ಷಯರೋಗದ ಲಕ್ಷಣಗಳು, ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಈ ರೋಗ ಹರಡುತ್ತದೆ. ಕ್ಷಯರೋಗವು ಶ್ವಾಸಕೋಶ ಮತ್ತು ಶ್ವಾಸಕೋಶೆತರ ಅಂಗಗಳಿಗೆ ಹರಡುತ್ತದೆ. ಒಮ್ಮೆ ಕ್ಷಯರೋಗ ಪತ್ತೆ ಆದಲ್ಲಿ ಪ್ರಾರಂಭಿಕ ಹಂತವಾದಲ್ಲಿ 6 ತಿಂಗಳಿನಿAದ 9 ತಿಂಗಳನವರಿಗೆ ಚಿಕಿತ್ಸೆ ನೀಡಿದಲ್ಲಿ ಕ್ಷಯ ರೋಗ ನಿರ್ಮೂಲನೆಯಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಹಾವೇರಿ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲ ಜಿಲ್ಲೆಯ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಖಾಸಗಿ ಆಸ್ಪತ್ರೆಯವರು ರೋಗಿಗಳ ವಿವರಗಳನ್ನು ತಂತ್ರಾAಶದಲ್ಲಿ ಅಥವಾ ಜಿಲ್ಲಾಸ್ಪತ್ರೆಗೆ ಹಂಚಿಕೆ ಮಾಡುವುದಿಲ್ಲ, ಆದುದರಿಂದ ಕ್ಷಯರೋಗಗಳ ಸಂಖ್ಯೆ ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ ಮತ್ತು ರೋಗದ ನಿರ್ಮೂಲನೆಯಲ್ಲಿ ವಿಳಂಬವಾಗುತ್ತಿದೆ. ಹೆಚ್.ಐ.ವಿ ಪೀಡಿತರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಕ್ಷಯರೋಗ ಬೇಗ ಹರಡುತ್ತದೆ, ಕ್ಷಯರೋಗಿಗಳಿಗೆ ಪ್ರತಿ ತಿಂಗಳು ರೂ. 1000/- ಗೌರವಧನ, ಉಚಿತವಾಗಿ ಚಿಕಿತ್ಸೆ ಮತ್ತು ಆಹಾರ ಕಿಟ್ ನೀಡಲಾಗುತ್ತಿದೆ. ಇದುವರೆವಿಗೆ 8991 ಆಹಾರ ಕಿಟ್ ವಿತರಿಸಲಾಗಿದೆ, ಈ ಸಾಲಿನಲ್ಲಿ 2080 ಪ್ರಕರಣಗಳು ಪತ್ತೆಯಾಗಿದೆ ಎಂದು ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮುರಳೀಧರ್ ಅವರು ಸಭೆಗೆ ತಿಳಿಸಿದರು.
ಕ್ಷಯರೋಗ ನಿರ್ಮೂಲನೆಗೆ ಶಾಲಾ-ಕಾಲೇಜು , ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು. ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಕ್ಷಯರೋಗಿಗಳ ಮಾಹಿತಿಯನ್ನು ಜಿಲ್ಲಾಸ್ಪತ್ರೆಗೆ ನೀಡಲು ಕ್ರಮವಹಿಸಬೇಕು. ಕ್ಷಯರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ನಿಗಾವಹಿಸಬೇಕು, 61 ಗ್ರಾಮ ಪಂಚಾಯಿತಿಗಳÀನ್ನು ಕ್ಷಯರೋಗ ಮುಕ್ತ ಗ್ರಾಮಪಂಚಾಯಿತಿ ಎಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಶ್ರಮವಹಿಸಿ ಕ್ಷಯರೋಗ ಮುಕ್ತ ಜಿಲ್ಲಾಯಾಗಿಸಲು ಆರೋಗ್ಯ ಇಲಾಖೆಯ ವೈದ್ಯರು ಮತ್ತು ಅಧಿಕಾರಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು, ಸಂಬAಧಪಟ್ಟ ಇಲಾಖೆಯ ಮುಖ್ಯಸ್ಥರುಗಳು ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸಲಹೆ ನೀಡಿದರು.
 ಹೆಚ್.ಐ.ವಿ, ಏಡ್ಸ್ ಹರಡುವಿಕೆ ಮತ್ತು ನಿಯಂತ್ರಣ : ಜಿಲ್ಲೆಯಲ್ಲಿ ಶೇ.0.35 ರಷ್ಟು ಹೆಚ್.ಐ.ವಿ. ಸೋಂಕಿತರ ಪ್ರಮಾಣವಿದ್ದು, ಜಿಲ್ಲೆಯಲ್ಲಿ ಪ್ರತಿವರ್ಷ 200 ಹೆಚ್.ಐ.ವಿ ಪ್ರಕರಣಗಳು ಪತ್ತೆಯಾಗುತ್ತಿವೆ. ಹೆಚ್ಚಿನ ಕುತೂಹಲ ಮತ್ತು ಹೊಸ ಅನುಭವ ಪಡೆಯುವ ಆಸಕ್ತಿ ಮತ್ತು ಬದಲಾಗುತ್ತಿರುವ ಸಾಮಾಜಿಕ, ಕೌಟುಂಬಿಕ, ವಾತಾವರಣ, ಸಂಪ್ರದಾಯ , ಮೌಲ್ಯಗಳು ಮತ್ತು ನೀತಿಗಳಿಂದ ಯುವ ಜನತೆಯಲ್ಲಿ ಹೆಚ್ಚಾಗಿ ಹೆಚ್.ಐ.ವಿ ಮತ್ತು ಎಸ್.ಟಿ.ಐ ಸೋಂಕು ಹರಡುತ್ತಿದೆ. ಇಲಾಖೆಯು ಹೆಚ್.ಐ.ವಿ ಬಗೆಗಿರುವ ಕಳಂಕ ಮತ್ತು ತಾರತಮ್ಯವನ್ನು ಹೋಗಲಾಡಿಸಲು ಅನುದಿನದ ಕಾರ್ಯಕ್ರಮಗಳಲ್ಲಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇತ್ತೀಜಿಗೆ ಕಡ್ಡಾಯವಾಗಿ ಗರ್ಭಿಣಿಯರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಲಾಗುತ್ತಿದ್ದು ಹೆಚ್.ಐ.ವಿ ಲಕ್ಷಣಗಳು ಕಂಡು ಬಂದರೆ ಗರ್ಭೀಣಿಯವರಿಗೆ ವಿಶೇಷವಾಗಿ ಚಿಕಿತ್ಸೆಯನ್ನು ನೀಡಿ ತಾಯಿಯಿಂದ ಮಗುವಿಗೆ ಹರಡುವುದನ್ನು ನಿಯಂತ್ರಿಸಲು ಮತ್ತು ಹೆಚ್.ಐ.ವಿ ಮುಕ್ತ ಮಗು ಪಡೆಯಲು ಕ್ರಮವಹಿಸಲಾಗಿದೆ. ಬಂಧೀಖಾನೆ ಯಲ್ಲಿ ಪ್ರತಿ ವಾರಕೊಮ್ಮೆ ರಕ್ಷ ಪರೀಕ್ಷೆ ಮಾಡಲಾಗುತ್ತಿದೆ. ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳ ಮೂಲಕ ಹೆಚ್.ಐ.ವಿ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ, ದಾವಣಗೆರೆಯ ಸಂಜೀವಿನಿ ಪಾಸಿಟಿವ್ ನೆಟ್‌ವರ್ಕ್ , ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಮತ್ತು ಅಭಯ ಸ್ಪಂದನ ಎಂಬ ಖಾಸಗಿ ಸಂಸ್ಥೆಗಳ ಮೂಲಕ ಹೆಚ್.ಐ.ವಿ ಸೋಂಕಿತರ ಆರೈಕೆ, ಲೈಂಗಿಕ ವೃತ್ತಿ ನಿರತ ಮಹಿಳೆಯರಿಗೆ ಸಹಾಯ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಹೆಚ್.ಐ.ವಿ ಸೋಂಕಿತರಿಗೆ ತಲುಪಿಸುವುದು, ಜನರಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಏಡ್ಸ್ ನಿರ್ಮೂಲನಾಧಿಕಾರಿ ಡಾ.ಮುರಳೀಧರ್ ಅವರು ಸಭೆಗೆ ತಿಳಿಸಿದರು.
ಹದಿಹರೆಯದ ಸಮಸ್ಯೆಗಳನ್ನು ಪರಿಹರಿಸಲು ಆಪ್ತ ಸಮಾಲೋಚನೆ , ವೈದ್ಯರು, ಶಿಕ್ಷಕರು ಮತ್ತು ಹಿರಿಯರಿಂದ ಸಹಾಯ ಮತ್ತು ಸೇವೆಗಳನ್ನು ಪಡೆಯಬೇಕು, ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವುದು, ಎಚ್.ಐ.ವಿ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮವಹಿಸಬೇಕು. ಉಚಿತವಾಗಿ ಸಿಗುವ ಸೌಲಭ್ಯಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಅದನ್ನು ಹೆಚ್.ಐ.ವಿ ಭಾಧಿತರಿಗೆ ತಲುಪಿಸಬೇಕು, ಅಗತ್ಯಕ್ಕಿಂತ ಹೆಚ್ಚಾಗಿ ಔಷಧಿಗಳನ್ನು ಸಂಗ್ರಹಿಸುವುದು, ಪೋಸ್ಟರ್ ಮತ್ತು ಕರಪತ್ರಗಳ ಮೂಲಕ ಪ್ರಚಾರ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ತಾಲ್ಲೂಕು ವೈಧಾಧಿಕಾರಿಗಳು , ರಕ್ತ ಕೇಂದ್ರಗಳ ಮುಖ್ಯಸ್ಥರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *