Day: February 14, 2026

ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್‍ನಲ್ಲಿ ನಡೆಯಲಿರುವ ಸಂತ ಸೇವಾಲಾಲರ 287ನೇ ಜಯಂತ್ಯುತ್ಸವ ಸಿದ್ದತೆ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಎಸ್‍ಪಿ ಎಚ್.ಟಿ.ಶೇಖರ್, ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ಶಿವಮೊಗ್ಗ ಎಡಿಸಿ ವಿ.ಅಭಿಷೇಕ್, ವ್ಯವಸ್ಥಾಪಕ ಎನ್.ರಾಜು ಹಾಗೂ ಎಂ.ಸಿ.ಎ ಗುತ್ತಿಗೆ ಪಡೆದಿರುವ ಪ್ರಿಯಾಮಣಿ ಅವರೊಂದಿಗೆ ಚರ್ಚಿಸಿದರು.

ನ್ಯಾಮತಿ ತಾಲ್ಲೂಕು ಸಂತ ಸೇವಾಲಾಲರ ಜನ್ಮಸ್ಥಾನ ಭಾಯಾಗಡ್‍ನಲ್ಲಿ ಶುಕ್ರವಾರದಿಂದ ಮೂರು ದಿನ ನಡೆಯಲಿರುವ 287ನೇ ಜಯಂತ್ಯುತ್ಸವಕ್ಕೆ ಹರಪನಹಳ್ಳಿ ತಾಲ್ಲೂಕಿನ ತಾಂಡದಿಂದ ಮಾಲಾಧಾರಿಗಳು ಕುದುರೆಯೊಂದಿಗೆ ಪಾದಯಾತ್ರೆಯಲ್ಲಿ ಬರುತ್ತಿರುವುದು.

ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವಕ್ಕೆ ಪ್ರವೇಶದ್ವಾರದ ಬಳಿ ಕಾಟಿ ಆರೋಹಣ ಮತ್ತು ಭೋಗ್ ಪೂಜೆಯೊಂದಿಗೆ ವಿದ್ಯುಕ್ತವಾಗಿ ಚಾಲನೆ.

ನ್ಯಾಮತಿ ತಾಲ್ಲೂಕು ಭಾಯಾಗಡ್‍ನಲ್ಲಿ ಶುಕ್ರವಾರ ಸಂತ ಸೇವಾಲಾಲ್ ಅವರ 287ನೇ ಜಯಂತ್ಯುತ್ಸವಕ್ಕೆ ಪ್ರವೇಶದ್ವಾರದ ಬಳಿ ಕಾಟಿ ಆರೋಹಣ ಮತ್ತು ಭೋಗ್ ಪೂಜೆಯೊಂದಿಗೆ ವಿದ್ಯುಕ್ತವಾಗಿ ಸಮುದಾಯದ ಮುಖಂಡರು ಚಾಲನೆ ನೀಡಿದರು.ಬೆಳಿಗ್ಗೆ ಕೆಂಪು ಮತ್ತು ಬಿಳಿ ಬಣ್ಣದ ಕಾಟಿಗಳನ್ನು ಧರ್ಮದ ಸಂಕೇತವಾಗಿ ಆರೋಹಣ ಮಾಡಲಾಯಿತು.…