ದಾವಣಗೆರೆ ಜೂ.06
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಮ್ಮ ಕನಸಿನ ಸಾರಿಗೆಯೂ
ಸಹ ಹಲವು ದಿನಗಳ ಲಾಕೌಡೌನ್ ನಿಂದ ಸ್ಥಬ್ಬವಾಗಿತ್ತು. ಆದರೆ
ಇದೀಗ ಮತ್ತೆ ನಿಮ್ಮ ಕನಸಿಗೆ ಜೀವ ತುಂಬಲು, ನಿಮ್ಮ
ಚಟುವಟಿಕೆಗಳಿಗೆ ಸಹಾಯಕವಾಗಲು ಪುನಃ ನಿಮ್ಮ ಬಳಿಗೆ ನಿಮ್ಮ
ಅವಶ್ಯಕತೆಗನುಗುಣವಾಗಿ ಬರುತ್ತಿದೆ. ಈ ಸಮಯದಲ್ಲಿ ನಿಮ್ಮ
ಸುರಕ್ಷತೆಯೇ ನಮ್ಮ ಆದ್ಯತೆ ಆಗಿದ್ದು ಬಸ್ ಹತ್ತಲು ಹಿಂಜರೆಯ
ಬೇಡಿ.
ಪ್ರಯಾಣಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ:
ಚಾಲಕ ಮತ್ತು ನಿರ್ವಾಹಕರಿಗೆ ಮಾಸ್ಕ್, ಕೈಗವಸು,
ಸ್ಯಾನಿಟೈಸರ್ಗಳನ್ನು ವಿತರಿಸಲಾಗಿದೆ. ಪ್ರಮುಖ ಬಸ್ ನಿಲ್ದಾಣಗಳಲ್ಲಿ
ಪ್ರಮಾಣಿಕರ ಆರೋಗ್ಯ ತಪಾಸಣೆ ಮಾಡಲು ಕ್ರಮ
ಕೈಗೊಳ್ಳಲಾಗಿದೆ. ಬಸ್ಗಳ ಒಳ ಮತ್ತು ಹೊರಭಾಗವನ್ನು
ಸೋಂಕು ನಿವಾರಕ Á್ರವಣ ಸಿಂಪಡಿಸುವ ಮೂಲಕ ಕಾರ್ಯಾಚರಣೆ
ಮಾಡಲಾಗುತ್ತಿದೆ. ಸಂಸ್ಥೆ ಆರ್ಥಿಕ ನಷ್ಟದಲ್ಲಿದ್ದರೂ ಸಹ
ಪ್ರಯಾಣ ದರದಲ್ಲಿ ಯಾವುದೇ ರೀತಿಯ ಹೆಚ್ಚಳವಿಲ್ಲ.
ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪ್ರಯಾಣಿಸಿ ಸಂಸ್ಥೆಯೊಂದಿಗೆ
ಕರೋನಾ ಹಿಮ್ಮೆಟ್ಟಿಸಲು ಕೈ ಜೋಡಿಸಬೇಕು. ಸಂಸ್ಥೆಯ ಎಲ್ಲಾ
ಮಾದರಿಯ ಸೇವೆಗಳನ್ನು ಪ್ರಾರಂಭಿಸಲಾಗಿದೆ ಎಂದು
ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ
ಸಿದ್ದೇಶ್ವರ ಹೆಬ್ಬಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
