ದಾವಣಗೆರೆ ಸೆ.09
ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು
ಸ್ನಾತಕೋತ್ತರ ಕೇಂದ್ರದಲ್ಲಿ ಇಂದು ದೈಹಿಕ ಶಿಕ್ಷಣ
ಕೇಂದ್ರವನ್ನು ಕಾಲೇಜು ಶಿಕ್ಷಣ ಇಲಾಖೆ ಶಿವಮೊಗ್ಗ ಪ್ರಾದೇಶಿಕ ಜಂಟಿ
ನಿದೇಶಕರಾದ ಪ್ರೊ, ವೀರಭದ್ರಪ್ಪ ಉದ್ಘಾಟಿಸಿ ದೈಹಿಕ ಶಿಕ್ಷಣ
ಕೇಂದ್ರದಿಂದ ಸಾಕಷ್ಟು ಪ್ರತಿಭೆಗಳು ರಾಜ್ಯಕ್ಕೆ ಮತ್ತು ದೇಶಕ್ಕೆ
ಕೊಡುಗೆಯಾಗಿ ಬರಲಿ ಎಂದು ಶುಭ ಆರೈಸಿದರು.
ಈ ವೇಳೆಯಲ್ಲಿ ಕಾಲೇಜು ಪ್ರಾಂಶುಪಾಲರಾದ ತೂ,ಕ ಶಂಕರಯ್ಯ,
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ, ವೀರೇಂದ್ರ, ಪ್ರೊ.ಭೀಮಣ್ಣ,
ಪ್ರೊ, ಸುಣಗಾರ್, ಪ್ರೊ ಅಂಜಿನಪ್ಪ, ಪ್ರೊ, ಶಂಕರ್ ಶೀಲಿ, ಮತ್ತು
ದೈಹಿಕ ಶಿಕ್ಷಣ ಕೇಂದ್ರದ ಸಿಬ್ಬಂದಿಗಳಾದ ಮಂಜಮ್ಮ, ಗೀತಾ ಮತ್ತು
ಬೋಧಕೇತರ ಸಿಬ್ಬಂದಿ ಉಪಸ್ಥಿತಿರಿದ್ದರು.
